ಪೋಸ್ಟ್‌ಗಳು

ಏಪ್ರಿಲ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಪ್ಪಟ ಧಾರವಾಡ ನೆಲದ ಕಾದಂಬರಿ

ಗಂಗವ್ವ ಗಂಗಾಮಾಯಿ ಅಪ್ಪಟ ಧಾರವಾಡ ನೆಲದ ಸೊಗಡಿನ ಕೃತಿ. ಮೂರು ಕುಟುಂಬಗಳ ಸುತ್ತಲೆ ಸುತ್ತುವ ಈ ಕಾದಂಬರಿ, ಧಾರವಾಡವನ್ನು ಹಾಗೂ ಆ ಭಾಷೆಯನ್ನು ಬಹಳ ಚೆನ್ನಾಗಿ ಲೇಖಕರು ಈ ಕಾದಂಬರಿ ಅಲ್ಲಿ ಬಳಸಿಕೊಂಡಿದ್ದ ಮೊದಲನೆಯ ಕುಟುಂಬ ಗಂಗವ್ವ, ಅವಳ ಮಗ ಕಿಟ್ಟಿ ಮತ್ತು ಗಂಗವ್ವಳ ತಮ್ಮ ರಾಘಪ್ಪನದ್ದು. ಇನ್ನೊಂದು ದೇಸಾಯಿಯವರ ಕುಟುಂಬ. ಇದು ಗಂಗವ್ವನಿಗೆ ಬೆನ್ನೆಲುಬಾಗಿ ನಿಂತ ಕುಟುಂಬ. ತನ್ನ ಮಗ ಕಿಟ್ಟಿಯನ್ನು ಓದಿಸಿ ಸ್ವತಂತ್ರನನ್ನಾಗಿ ಮಾಡುವುದೇ ಗಂಗವ್ವನ ಗುರಿ. ಈ ಕುಟುಂಬದಲ್ಲಿ ಗಂಗವ್ವಳ ತಮ್ಮ ರಾಘಪ್ಪ ಪ್ರವೇಶ ಪಡೆದ ಮೇಲೆ ಕಥೆ ಮತ್ತಷ್ಟು ಚುರುಕು ಪಡೆಯುತ್ತದೆ. ರಾಘಪ್ಪನನ್ನು ದ್ವೇಷಿಸುತ್ತಿದ್ದ ಗಂಗವ್ವ ,ಆದರೆ  ಕಿಟ್ಟಿ ರಾಘಪ್ಪನ ಮಗಳನ್ನೆ ಮದುವೆಯಾಗುತ್ತಾನೆ. ನಂತರ ಕಥೆಯು ರಾಘಪ್ಪನ ಸುತ್ತ ಗಿರಕಿ ಹೊಡೆಯುತ್ತದೆ. ಅವನ ಅಂತರಂಗ, ಚಾಣಾಕ್ಷತೆ ಮತ್ತು ಬಲ ಹೀನತೆಗಳ ಪರಿಚಯವಾಗುತ್ತದೆ. ರಾಘಪ್ಪನ ಉಪಾಯ ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಇರುವ ಪ್ರಮುಖ ಅಡ್ಡಿ ಎಂದರೆ ದೇಸಾಯಿ ಕುಟುಂಬದ್ದು. ಇತ್ತ  ದೇಸಾಯಿ ಕುಟುಂಬದಲ್ಲಿ, ದೇಸಾಯಿವರ ಎರಡನೇ ಮಗ ವಸಂತ ಅವರ ಬಲ ಹೀನತೆ. ರಾಘಪ್ಪ ಮತ್ತು ದೇಸಾಯಿ ಇಬ್ಬರು ತಮ್ಮ ಚದುರಂಗದಾಟದಲ್ಲಿ ತಮ್ಮ ಕಾಯಿಗಳನ್ನು ನಡೆಸುತ್ತ ಹೋಗುತ್ತಾರೆ. ಆ ಶೀತಲ ಸಮರದಲ್ಲಿ  ರಾಘಪ್ಪನಿಗೆ ಸೋಲುಂಟಾಗುತ್ತದೆ. ಇದರ ಜೊತೆಯಲ್ಲಿ ನಡೆಯುವ ಘಟನೆಗಳಲ್ಲಿ, ರಾಘಪ್ಪನ ಪ್ರೇಯಸಿ ಮೆಹಬೂಬಾಳ ಮತ್ತು ಪತ್ನಿಯ ಸಾವು, ರಾಘಪ