ಪೋಸ್ಟ್‌ಗಳು

ಜನವರಿ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬದುಕಿನ ಅನಾವರಣದ "ಬೊಗಸೆಯಲ್ಲಿ ಮಳೆ"

ಇಮೇಜ್
ಮೊದಲಿನಿಂದಲೂ ಜಯಂತ ಕಾಯ್ಕಿಣಿ ಎಂದರೇ ಅದೆಂತಹದೋ ಮೋಹ. ಪುಸ್ತಕದಂಗಡಿಗೆ ಹೋದಾಗಲೆಲ್ಲ ನನ್ನ ಕಂಗಳು ಕಾಯ್ಕಿಣಿ ಪುಸ್ತಕಗಳನ್ನು ಹುಡುಕುತ್ತವೆ. ಅವರ ಪುಸ್ತಕಗಳು ನನ್ನ ಹತ್ತಿರ ಇದ್ದರೂ ಕೂಡ, ಅವರ ಪುಸ್ತಕವನ್ನು ಕೈಗೆತ್ತಿಕೊಂಡು ಮುಖಪುಟವನ್ನು ಸವರಿ , ಒಂದೆರಡು ಪುಟಗಳ ಮೇಲೆ ಕೈಯಾಡಿಸಿದರೆ ಸಮಾಧಾನ. ಅವರ ಪುಸ್ತಕಗಳೆಂದರೆ ಅದೆಂಥಹದೋ ಅಚ್ಚರಿ,‌ಬೆರಗು, ಕುತೂಹಲ, ಅವರು ಜಗವನ್ನು ನೋಡುವ ರೀತಿ, ಬಳಸುವ ಶಬ್ಧ, ರೂಪಕಗಳು ಸದಾ ನನಗೆ‌ ಅಚ್ಚರಿಗೆ ದೂಡುತ್ತವೆ. ಇತ್ತೀಚೆಗೆ ಓದಿದ ಕಾಯ್ಕಿಣಿ ಅವರ ಅಂಕಣ ಬರಹಗಳ ಸಂಗ್ರಹವಾದ "ಬೊಗಸೆಯಲ್ಲಿ ಮಳೆ" ಪುಸ್ತಕ ಓದಿದಾದ ಮೇಲೆಯೂ ಇನ್ನೂ ಕಾಡುತ್ತಿದೆ. ಮುಂಬೈ ಹಾಗೂ ಗೋಕರ್ಣದ ರಥಬೀದಿಗಳಲ್ಲಿ ಒಂದು‌ ಸುತ್ತು ಸುತ್ತಿದಂಗಾಯ್ತೂ. ಅವರಿಗೆ ಅವರೇ ಸಾಟಿ. ಕಾಯ್ಕಿಣಿ ಅವರ ಅಲೆಮಾರಿತನದ ಅನುಭವಗಳು ಸೃಜನಶೀಲ ಬರಹಗಳಾಗಿ ಹೊರ ಹೊಮ್ಮಿವೆ. ಮುಂಬೈ ನಗರದ ಪ್ರೀತಿ, ಗೋಕರ್ಣದೊಂದಿಗಿರುವ ನಂಟು, ಆಪ್ತತೆ ಅವೆಲ್ಲವೂ ಅದರೆಡೆಗಿರುವ ತುಡಿತಗಳಾಗಿ ಹೊರ ಹೊಮ್ಮಿವೆ. ಮುಂಬೈ ಬದುಕನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ, ಶಹರು ಜೀವನದ ಸಾಮಾಜಿಕ ಸೂಕ್ಷ್ಮಗಳು, ತವಕ- ತಲ್ಲಣಗಳು, ನಗರದ ಬದುಕಿನ ಕಥೆಗಳು ಇಲ್ಲಿ ಅಕ್ಷರಗಳಲ್ಲಿ ಅನಾವರಣಗೊಂಡಿವೆ. ಇಲ್ಲಿ ಮುಂಬೈನ ಆಧುನಿಕತೆಯ ಜೊತೆಗೆ , ರಥಬೀದಿಯ ಕತೆಯನ್ನು ಲೇಖಕರು ದಾಖಲಿಸಿದ್ದಾರೆ. ಇದರ ಮತ್ತೊಂದು ವಿಶೇಷತೆ ಏನೆಂದರೆ ಅತೀ ಸಣ್ಣ ವಿಷಯಗಳನ್ನಿಟ್ಟುಕೊಂಡು ಅದನ
ಇಮೇಜ್
ಪುಸ್ತಕ- ಚಿತಾದಂತ ಲೇಖಕ- ಡಾ.ಕೆ.ಎನ್.ಗಣೇಶಯ್ಯ ಚಿತಾದಂತ ಹೆಸರೇ ಸೂಚಿಸುವಂತೆ ಇದೊಂದು ರೋಚಕ ಕಾದಂಬರಿಯಾಗಿದ್ದು, ಇತಿಹಾಸದ ಅಂಶಗಳನ್ನು ಪ್ರಧಾನವಾಗಿಟ್ಟುಕೊಂಡು ಕಾಲ್ಪನಿಕ ಅಂಶಗಳನ್ನು ಸೇರಿಸಿ ವಿಶಿಷ್ಟ ಶೈಲಿಯಲ್ಲಿ ಬರವಣಿಗೆಯಲ್ಲಿ ಸಿದ್ಧಹಸ್ತರು. ಬೌದ್ಧದರ್ಮದ ಬಗ್ಗೆ, ಅಲೆಗ್ಸಾಂಡರ್ ನು ಭಾರತಕ್ಕೆ ಬಂದಿದ್ದು, ಅವನು ವಶಪಡಿಸಿಕೊಂಡ ಸಂಪತ್ತು ಏನಾಯ್ತೂ? ತೇರವಾದಿಗಳು ಯಾರು? ನಿಧಿಯ ಹಿಂದೆ ಬೆನ್ನು ಬಿದ್ದ ಚೋರರು? ಅದನ್ನು ಕಾಪಾಡುವಲ್ಲಿ ನಾಯಕಿ , ನಿಜವಾಗಿಯೂ ಬುದ್ಧನ ದಂತ ಇನ್ನೂ ಇದೆಯೇ?  ಮುಂತಾದ ವಿಷಯಗಳನ್ನು ಒಳಗೊಂಡು ಓದುಗರ ಮುಂದೆ ಇದನ್ನು ಹರಿವಿಟ್ಟಿದ್ದಾರೆ. ಕ್ರಿಸ್ತಪೂರ್ವದಿಂದ ಹಿಡಿದು ಇಂದಿನ ಆಧುನಿಕತೆಯವರೆಗೂ ಇದರ ವ್ಯಾಪ್ತಿ ಹರಡಿಕೊಂಡಿದೆ. ಕಾದಂಬರಿಗೆ ಪೂರಕವಾಗಿ ಅವರು ಕೊಡುವ ಉಲ್ಲೇಖಗಳು, ಆಕರ ಗ್ರಂಥಗಳು, ನಕ್ಷೆಗಳು, ಚಿತ್ರಗಳು, ಅಚ್ಚರಿಯನ್ನು ಮೂಡಿಸುತ್ತವೆ. ಇದು ನಿಜವಾಗಿಯೂ ನಡೆದ ಕಥೆಯೆ ಎಂಬುವಷ್ಟರ ಮಟ್ಟಿಗೆ ಓದುಗನನ್ನು ಆವರಿಸಿಕೊಳ್ಳುತ್ತದೆ.

ಇಳಿಸಂಜೆಗಳು ಮಾತನಾಡುತ್ತವೆ...

ಇಮೇಜ್
ಅದು ನಿಡುಸುಯ್ಯುವ ನಿಚ್ಚಳ ಮಧ್ಯಾಹ್ನ. ಎಂದಿನಂತೆಯೇ ಸೂರ್ಯನ ಉದಯದೊಂದಿಗೆ ಬೆಳಗು ಮೂಡುತ್ತದೆ. ಚಂದ್ರನೊಂದಿಗೆ ಕತ್ತಲು ಸುತ್ತಲು ಚಮಚ ಉತ್ತರ. ಇದು ತಪ್ಪದೇ ನಡೆಯುವ ನಿತ್ಯದ ಚಾಳಿ. ಚಳಿಗಾಲದ ಹಗಲುಗಳು ಮುಸುಕು ಹೊದ್ದು ಮಲಗಿಬಿಟ್ಟಿರುತ್ತವೆ. ರಗ್ಗಿನೊಳಗೆ ಬೆಚ್ಚನೆಯ ಕನಸುಗಳು ಮೂಡುತ್ತಿರುತ್ತವೆ. ಹಗಲುಗಳು ಸರಿಯುತ್ತದೆ. ಇರುಳುಗಳು ಸುಳಿದಾಡುತ್ತವೆ. ಚಂದ್ರಾಮ ಮುಗುಳ್ನಗುತ್ತಾನೆ. ರಗ್ಗಿನೊಳಗೆ ಹತ್ತಾರು ಮಾತುಗಳು ಒಳಸುಳಿಯುತ್ತವೆ ಯಾರಿಗೂ ಕೇಳದಂತೆ. ಸಂಜೆಯೂ ಮಾತ್ರ ಎಂದಿನಂತೇ ಆಪ್ತವಾಗಿರುತ್ತದೆ. ಕೆಂಪಡರುತ್ತಿರುವ ಆ ದಿನಕರನನ್ನು ನೋಡುವುದೇ ಒಂದು ಸೊಗಸು. ರಸ್ತೆಯ ತುದಿಯಲ್ಲಿ ಎರಡು ಜೋಡಿ ಹೆಜ್ಜೆಗಳು ಒಟ್ಟಿಗೆ ಅಂಗೈಗಳನ್ನು ಬೆಸೆದುಕೊಂಡು ಸುಮ್ಮನೆ ಹೆಜ್ಜೆಯನ್ನು ಎಣಿಸುತ್ತಿವೆ. ಮೌನವೂ ಕೂಡ ಮಾತನ್ನು ಕಲಿಯುತ್ತಿದೆ. ಹಬಾಯಾಡುತ್ತಿರುವ ಚಹಾ, ಚಹಾದ ಕಪ್ಪಿನ ಸುತ್ತಲು ಹೆಣೆದ ಬೆರಳುಗಳು ಚೂರೇ ಚೂರು ಕಪ್ಪಿನ ಅಲಗನ್ನು ತುಟಿಗೆ ತಾಕಿಸುತ್ತಾ, ಕಂಗಳೆರಡು ಸುತ್ತ- ಮುತ್ತಲೂ ಓಡುತ್ತಿರುವ ಜಗವನ್ನು ತಾಕುತ್ತಾ, ಮತ್ತೆ ಕಪ್ಪಿನೊಳಗೆ ಲೀನವಾಗುತ್ತದೆ. ದಿನವೂ ಅದೇ ತಿರುವಿನಲ್ಲಿ ಕುಳಿತಿರುವ ಮುದುಕಿಯೊಬ್ಬಳು ಪರಿಚಯದಂತೆ ನಗುವನ್ನು ಬೀರುತ್ತಾಳೆ. ಇಳಿಸಂಜೆಗಳು ಜಾರಿಕೊಳ್ಳುತ್ತವೆ, ನಸುಕಾದ ಮಬ್ಬಿನೊಳಗೆ. ಮೋಡಗಳು ಒಂದಕ್ಕೊಂದು ರಂಗೇರಿಸಿಕೊಳ್ಳುತ್ತವೆ. ಅಲ್ಲೆಲ್ಲೊ ಮೆಲುದನಿಯಲ್ಲಿ ಹಾಡು ಕಿವಿಗೆ ಬೀಳುತ್ತದೆ. ಕಾಫಿ ಕಪ್ಪುಗಳು ಪರಸ