ಪುಸ್ತಕ- ಚಿತಾದಂತ
ಲೇಖಕ- ಡಾ.ಕೆ.ಎನ್.ಗಣೇಶಯ್ಯ

ಚಿತಾದಂತ ಹೆಸರೇ ಸೂಚಿಸುವಂತೆ ಇದೊಂದು ರೋಚಕ ಕಾದಂಬರಿಯಾಗಿದ್ದು, ಇತಿಹಾಸದ ಅಂಶಗಳನ್ನು ಪ್ರಧಾನವಾಗಿಟ್ಟುಕೊಂಡು ಕಾಲ್ಪನಿಕ ಅಂಶಗಳನ್ನು ಸೇರಿಸಿ ವಿಶಿಷ್ಟ ಶೈಲಿಯಲ್ಲಿ ಬರವಣಿಗೆಯಲ್ಲಿ ಸಿದ್ಧಹಸ್ತರು.

ಬೌದ್ಧದರ್ಮದ ಬಗ್ಗೆ, ಅಲೆಗ್ಸಾಂಡರ್ ನು ಭಾರತಕ್ಕೆ ಬಂದಿದ್ದು, ಅವನು ವಶಪಡಿಸಿಕೊಂಡ ಸಂಪತ್ತು ಏನಾಯ್ತೂ? ತೇರವಾದಿಗಳು ಯಾರು? ನಿಧಿಯ ಹಿಂದೆ ಬೆನ್ನು ಬಿದ್ದ ಚೋರರು? ಅದನ್ನು ಕಾಪಾಡುವಲ್ಲಿ ನಾಯಕಿ , ನಿಜವಾಗಿಯೂ ಬುದ್ಧನ ದಂತ ಇನ್ನೂ ಇದೆಯೇ?  ಮುಂತಾದ ವಿಷಯಗಳನ್ನು ಒಳಗೊಂಡು ಓದುಗರ ಮುಂದೆ ಇದನ್ನು ಹರಿವಿಟ್ಟಿದ್ದಾರೆ.

ಕ್ರಿಸ್ತಪೂರ್ವದಿಂದ ಹಿಡಿದು ಇಂದಿನ ಆಧುನಿಕತೆಯವರೆಗೂ ಇದರ ವ್ಯಾಪ್ತಿ ಹರಡಿಕೊಂಡಿದೆ. ಕಾದಂಬರಿಗೆ ಪೂರಕವಾಗಿ ಅವರು ಕೊಡುವ ಉಲ್ಲೇಖಗಳು, ಆಕರ ಗ್ರಂಥಗಳು, ನಕ್ಷೆಗಳು, ಚಿತ್ರಗಳು, ಅಚ್ಚರಿಯನ್ನು ಮೂಡಿಸುತ್ತವೆ. ಇದು ನಿಜವಾಗಿಯೂ ನಡೆದ ಕಥೆಯೆ ಎಂಬುವಷ್ಟರ ಮಟ್ಟಿಗೆ ಓದುಗನನ್ನು ಆವರಿಸಿಕೊಳ್ಳುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಡಿಗ್ರಿ ಮುಗಿತು ಮುಂದೇನು?