ಪೋಸ್ಟ್‌ಗಳು

ಮಾರ್ಚ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಇಮೇಜ್
ಅಪ್ಪ ಕೇವಲ ಎರಡು ಅಕ್ಷರವಾದರೂ ಅದರ ಹಿಂದಿರುವ ಭಾವ ಅಳೆಯಲಾಗದ್ದು. ಅಪ್ಪ ಪ್ರತಿಯೊಬ್ಬ ಹೆಣ್ಣು ಮಕ್ಕಳ ಹೀರೋ. ಅವ್ವನ ಮಡಿಲಲ್ಲಿ ಬೆಚ್ಚಗೆ ಇದ್ದವರಿಗೆ, ಅಪ್ಪನ ಹೆಗಲ ಕಾವು ಬೇಗನೇ ಅರ್ಥವಾಗುವುದಿಲ್ಲ. ಇ...

ಪೆದ್ಗುಂಡನಿಗೆ,

ಲೋ ಪೆದ್ದು, ಅದ್ಯಾವಾಗ ನಿನ್ನ ಕಡೆಗೆ ನನ್ನ ಮನ ಅರಿವಿಲ್ಲದೆ ಜಾರಿತೋ, ನನಗೆ ಅರಿವಿಲ್ಲ. ಮನದಲ್ಲಿ‌ ಹೇಳಲಾಗದ ಸಿಹಿಯಾದ ಸಂಕಟ. ಈ ಸಕ್ಕರೆಯ ನೋವು ಮತ್ತಷ್ಟು ಹೆಚ್ಚಾಗಲಿ, ನಿನಗೂ ಇದರ ಪುಳಕವಾಗಲಿ ಎಂಬ ಸಿಹ...

ಸರಳ ಕಥಾನಕದ, ವಿಶಿಷ್ಟ ಶೈಲಿಯ ಕರ್ವಾಲೋ

ಇಮೇಜ್
ನನಗೆ ಮೊದಲಿನಿಂದಲೂ ತೇಜಸ್ವಿ ನೆಚ್ಚಿನ ಲೇಖಕರು. ಅವರ ಪುಸ್ತಕಗಳ ಹೆಸರು ಬಹಳ ಮಜವಾಗಿರ್ತಾವೆ. ಪ್ಯಾಪಿಲಾನ್, ಕರ್ವಾಲೋ , ಮಿಸ್ಸಿಂಗ್ ಲಿಂಕ್ ಹೀಗೆ. ಒಂದು ದಿನ ಸಪ್ನಾಗೆ ಹೋದಾಗ ಕರ್ವಾಲೋ ಪುಸ್ತಕವನ್ನು ನೋಡಿ ಹೆಸರು ವಿಚಿತ್ರವಾಗಿದೆಯಲ್ಲ‌ ಎಂದುಕೊಳ್ಳುವಾಗ ತೇಜಸ್ವಿಯವರ ಹೆಸರನ್ನು ನೋಡಿ ಎದೆಗವಚಿಕೊಂಡು ತಗೊಂಡು ಬಂದಿದ್ದೆ. ತಂದ ದಿನವೇ ಒಂದೇ ಗುಕ್ಕಿಗೆ ಕೂತು ಓದಿ ಮುಗಿಸಿದ್ದೆ. ಓದಿದ ಮೇಲೆ ಪ್ರಕೃತಿಯ ಹೊಸ ಪ್ರಪಂಚವೇ ಕಣ್ಣಿಗೆ ತೆರೆದುಕೊಂಡಿತ್ತು. ಹೆಸರು ಕರ್ವಾಲೋ ಆದರೂ ಇದರಲ್ಲಿ ಬರುವ ಎಲ್ಲ‌ ಪಾತ್ರಗಳು ಕೂಡ ಬಹುಮುಖ್ಯವಾಗಿವೆ. ಮಂದಣ್ಣ, ಪ್ಯಾರ ಹೀಗೆ ಯಾವುದೇ ಹೆಸರಿಟ್ಟಿದ್ದರು ನಡೆಯುತ್ತಿತ್ತು. ಸರಳ ಕಥಾನಕದ, ಕಲ್ಪನೆಯೊಂದಿಗೆ ಪ್ರಕೃತಿ , ಜೀವನಾನುಭವ ಹೀಗೆ ಎಲ್ಲವೂ ಇಲ್ಲಿ ಮಿಳಿತವಾಗಿರುವದರಿಂದ ಕಾದಂಬರಿ ಮತ್ತಷ್ಟು ಆಪ್ತವಾಗುತ್ತದೆ. ಎಲ್ಲರಿಗೂ ಬಹು ಸುಲಭವಾಗಿ ತಿಳಿಯುವಂತೆ ಸರಳ, ಸುಲಭ ಶೈಲಿಯಲ್ಲಿ ಬರೆಯುವುದು ತೇಜಸ್ವಿಯವರ ವೈಶಿಷ್ಟ್ಯವೇ ಸರಿ. ಅದರಲ್ಲೂ ಮಂದಣ್ಣನ ಪಾತ್ರ ನನಗೆ ಬಹು ಇಷ್ಟವಾದ್ದು. ಪ್ಯಾರ, ಪ್ರಭಾಕರ, ಕರಿಯಪ್ಪ, ಕಿವಿ ನಾಯಿ ಹೀಗೆ ಎಲ್ಲರೊಂದಿಗೆ ಸಾಗುತ್ತಾ ಹೋಗುವ ಕಾದಂಬರಿ ಒಮ್ಮೆಲೆ ಜೀವ ವಿಕಾಸದತ್ತ ನಮ್ಮನ್ನು ಕೊಂಡೊಯ್ಯುತ್ತದೆ. ಮೂರರ ಮುಂದೆ ಏಳು ಸೊನ್ನೆಗಳಷ್ಟು ಹಿಂದಿನ ಹಾರುವ ಓತಿಯತ್ತ ನಮ್ಮನ್ನು ಸೆಳೆದೊಯ್ಯುತ್ತಾರೆ. ಮೂಡಿಗೆರೆಯಲ್ಲಿ ಸಾಗುವ ಕಥೆಯಲ್ಲಿ ಇಡೀ ಮಲೆನಾಡಿನ ಸೊಬಗನ್ನು ಅಕ್ಷರಶಃ ಪದಗ...

ಶಿಶಿರ ಋತು ಕಾಡುವ ನೆನಪುಗಳ ಸಂತೆ..

ಇಮೇಜ್
ಶಿಶಿರ ಕಾಡುವ ನೆನಪುಗಳ ಸಂತೆ. ಮೆಲ್ಲನೆ ಚಳಿ ಅಡಿಯಿಡುವ ಹೊತ್ತದು. ಮುಸುಕಿನಲ್ಲಿ ಅವಿಸಿಕೊಳ್ಳುವ ಹೊತ್ತು, ಹಗಲು ಕಿರಿದಾಗಿ ಇರುಳು ದೊಡ್ಡದಾಗಿ ಕಾಣುವ ಹೊತ್ತದು. ಬೆಳಿಗ್ಗೆ ಏಳುವಾಗ ಇನ್ನಷ್ಟು ಹೊತ್...