ಪೋಸ್ಟ್‌ಗಳು

ಹಿತ್ತಲು ಎಂಬ ಕಾಡುವ ರೂಪಕ..!!

ಪ್ರತಿಯೊಂದು ಮನೆಗೂ ಒಂದೊಂದು ಹಿತ್ತಲು ಹಾಗೂ ಹಿಂಬಾಗಿಲು ಎಂಬುದೊಂದು ಇರಲೇಬೇಕು. ಪ್ರತಿಯೊಂದು ಮನೆಗೂ ಆ ಮನೆಯ ಹಿತ್ತಲೇ ಭೂಷಣ. ಈಗಿನ ಸಿಟಿ ಮನೆಗಳಲ್ಲಿ ಹಿತ್ತಲು ಎನ್ನುವುದು ಗೊತ್ತಿರುವುದಾಗಿರಲ...

ಅಪ್ಪಟ ಧಾರವಾಡ ನೆಲದ ಕಾದಂಬರಿ

ಗಂಗವ್ವ ಗಂಗಾಮಾಯಿ ಅಪ್ಪಟ ಧಾರವಾಡ ನೆಲದ ಸೊಗಡಿನ ಕೃತಿ. ಮೂರು ಕುಟುಂಬಗಳ ಸುತ್ತಲೆ ಸುತ್ತುವ ಈ ಕಾದಂಬರಿ, ಧಾರವಾಡವನ್ನು ಹಾಗೂ ಆ ಭಾಷೆಯನ್ನು ಬಹಳ ಚೆನ್ನಾಗಿ ಲೇಖಕರು ಈ ಕಾದಂಬರಿ ಅಲ್ಲಿ ಬಳಸಿಕೊಂಡಿದ್...

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಇಮೇಜ್
ಅಪ್ಪ ಕೇವಲ ಎರಡು ಅಕ್ಷರವಾದರೂ ಅದರ ಹಿಂದಿರುವ ಭಾವ ಅಳೆಯಲಾಗದ್ದು. ಅಪ್ಪ ಪ್ರತಿಯೊಬ್ಬ ಹೆಣ್ಣು ಮಕ್ಕಳ ಹೀರೋ. ಅವ್ವನ ಮಡಿಲಲ್ಲಿ ಬೆಚ್ಚಗೆ ಇದ್ದವರಿಗೆ, ಅಪ್ಪನ ಹೆಗಲ ಕಾವು ಬೇಗನೇ ಅರ್ಥವಾಗುವುದಿಲ್ಲ. ಇ...

ಪೆದ್ಗುಂಡನಿಗೆ,

ಲೋ ಪೆದ್ದು, ಅದ್ಯಾವಾಗ ನಿನ್ನ ಕಡೆಗೆ ನನ್ನ ಮನ ಅರಿವಿಲ್ಲದೆ ಜಾರಿತೋ, ನನಗೆ ಅರಿವಿಲ್ಲ. ಮನದಲ್ಲಿ‌ ಹೇಳಲಾಗದ ಸಿಹಿಯಾದ ಸಂಕಟ. ಈ ಸಕ್ಕರೆಯ ನೋವು ಮತ್ತಷ್ಟು ಹೆಚ್ಚಾಗಲಿ, ನಿನಗೂ ಇದರ ಪುಳಕವಾಗಲಿ ಎಂಬ ಸಿಹ...

ಸರಳ ಕಥಾನಕದ, ವಿಶಿಷ್ಟ ಶೈಲಿಯ ಕರ್ವಾಲೋ

ಇಮೇಜ್
ನನಗೆ ಮೊದಲಿನಿಂದಲೂ ತೇಜಸ್ವಿ ನೆಚ್ಚಿನ ಲೇಖಕರು. ಅವರ ಪುಸ್ತಕಗಳ ಹೆಸರು ಬಹಳ ಮಜವಾಗಿರ್ತಾವೆ. ಪ್ಯಾಪಿಲಾನ್, ಕರ್ವಾಲೋ , ಮಿಸ್ಸಿಂಗ್ ಲಿಂಕ್ ಹೀಗೆ. ಒಂದು ದಿನ ಸಪ್ನಾಗೆ ಹೋದಾಗ ಕರ್ವಾಲೋ ಪುಸ್ತಕವನ್ನು ನೋಡಿ ಹೆಸರು ವಿಚಿತ್ರವಾಗಿದೆಯಲ್ಲ‌ ಎಂದುಕೊಳ್ಳುವಾಗ ತೇಜಸ್ವಿಯವರ ಹೆಸರನ್ನು ನೋಡಿ ಎದೆಗವಚಿಕೊಂಡು ತಗೊಂಡು ಬಂದಿದ್ದೆ. ತಂದ ದಿನವೇ ಒಂದೇ ಗುಕ್ಕಿಗೆ ಕೂತು ಓದಿ ಮುಗಿಸಿದ್ದೆ. ಓದಿದ ಮೇಲೆ ಪ್ರಕೃತಿಯ ಹೊಸ ಪ್ರಪಂಚವೇ ಕಣ್ಣಿಗೆ ತೆರೆದುಕೊಂಡಿತ್ತು. ಹೆಸರು ಕರ್ವಾಲೋ ಆದರೂ ಇದರಲ್ಲಿ ಬರುವ ಎಲ್ಲ‌ ಪಾತ್ರಗಳು ಕೂಡ ಬಹುಮುಖ್ಯವಾಗಿವೆ. ಮಂದಣ್ಣ, ಪ್ಯಾರ ಹೀಗೆ ಯಾವುದೇ ಹೆಸರಿಟ್ಟಿದ್ದರು ನಡೆಯುತ್ತಿತ್ತು. ಸರಳ ಕಥಾನಕದ, ಕಲ್ಪನೆಯೊಂದಿಗೆ ಪ್ರಕೃತಿ , ಜೀವನಾನುಭವ ಹೀಗೆ ಎಲ್ಲವೂ ಇಲ್ಲಿ ಮಿಳಿತವಾಗಿರುವದರಿಂದ ಕಾದಂಬರಿ ಮತ್ತಷ್ಟು ಆಪ್ತವಾಗುತ್ತದೆ. ಎಲ್ಲರಿಗೂ ಬಹು ಸುಲಭವಾಗಿ ತಿಳಿಯುವಂತೆ ಸರಳ, ಸುಲಭ ಶೈಲಿಯಲ್ಲಿ ಬರೆಯುವುದು ತೇಜಸ್ವಿಯವರ ವೈಶಿಷ್ಟ್ಯವೇ ಸರಿ. ಅದರಲ್ಲೂ ಮಂದಣ್ಣನ ಪಾತ್ರ ನನಗೆ ಬಹು ಇಷ್ಟವಾದ್ದು. ಪ್ಯಾರ, ಪ್ರಭಾಕರ, ಕರಿಯಪ್ಪ, ಕಿವಿ ನಾಯಿ ಹೀಗೆ ಎಲ್ಲರೊಂದಿಗೆ ಸಾಗುತ್ತಾ ಹೋಗುವ ಕಾದಂಬರಿ ಒಮ್ಮೆಲೆ ಜೀವ ವಿಕಾಸದತ್ತ ನಮ್ಮನ್ನು ಕೊಂಡೊಯ್ಯುತ್ತದೆ. ಮೂರರ ಮುಂದೆ ಏಳು ಸೊನ್ನೆಗಳಷ್ಟು ಹಿಂದಿನ ಹಾರುವ ಓತಿಯತ್ತ ನಮ್ಮನ್ನು ಸೆಳೆದೊಯ್ಯುತ್ತಾರೆ. ಮೂಡಿಗೆರೆಯಲ್ಲಿ ಸಾಗುವ ಕಥೆಯಲ್ಲಿ ಇಡೀ ಮಲೆನಾಡಿನ ಸೊಬಗನ್ನು ಅಕ್ಷರಶಃ ಪದಗ...

ಶಿಶಿರ ಋತು ಕಾಡುವ ನೆನಪುಗಳ ಸಂತೆ..

ಇಮೇಜ್
ಶಿಶಿರ ಕಾಡುವ ನೆನಪುಗಳ ಸಂತೆ. ಮೆಲ್ಲನೆ ಚಳಿ ಅಡಿಯಿಡುವ ಹೊತ್ತದು. ಮುಸುಕಿನಲ್ಲಿ ಅವಿಸಿಕೊಳ್ಳುವ ಹೊತ್ತು, ಹಗಲು ಕಿರಿದಾಗಿ ಇರುಳು ದೊಡ್ಡದಾಗಿ ಕಾಣುವ ಹೊತ್ತದು. ಬೆಳಿಗ್ಗೆ ಏಳುವಾಗ ಇನ್ನಷ್ಟು ಹೊತ್...

ಬದುಕಿನ ಅನಾವರಣದ "ಬೊಗಸೆಯಲ್ಲಿ ಮಳೆ"

ಇಮೇಜ್
ಮೊದಲಿನಿಂದಲೂ ಜಯಂತ ಕಾಯ್ಕಿಣಿ ಎಂದರೇ ಅದೆಂತಹದೋ ಮೋಹ. ಪುಸ್ತಕದಂಗಡಿಗೆ ಹೋದಾಗಲೆಲ್ಲ ನನ್ನ ಕಂಗಳು ಕಾಯ್ಕಿಣಿ ಪುಸ್ತಕಗಳನ್ನು ಹುಡುಕುತ್ತವೆ. ಅವರ ಪುಸ್ತಕಗಳು ನನ್ನ ಹತ್ತಿರ ಇದ್ದರೂ ಕೂಡ, ಅವರ ಪುಸ್ತಕವನ್ನು ಕೈಗೆತ್ತಿಕೊಂಡು ಮುಖಪುಟವನ್ನು ಸವರಿ , ಒಂದೆರಡು ಪುಟಗಳ ಮೇಲೆ ಕೈಯಾಡಿಸಿದರೆ ಸಮಾಧಾನ. ಅವರ ಪುಸ್ತಕಗಳೆಂದರೆ ಅದೆಂಥಹದೋ ಅಚ್ಚರಿ,‌ಬೆರಗು, ಕುತೂಹಲ, ಅವರು ಜಗವನ್ನು ನೋಡುವ ರೀತಿ, ಬಳಸುವ ಶಬ್ಧ, ರೂಪಕಗಳು ಸದಾ ನನಗೆ‌ ಅಚ್ಚರಿಗೆ ದೂಡುತ್ತವೆ. ಇತ್ತೀಚೆಗೆ ಓದಿದ ಕಾಯ್ಕಿಣಿ ಅವರ ಅಂಕಣ ಬರಹಗಳ ಸಂಗ್ರಹವಾದ "ಬೊಗಸೆಯಲ್ಲಿ ಮಳೆ" ಪುಸ್ತಕ ಓದಿದಾದ ಮೇಲೆಯೂ ಇನ್ನೂ ಕಾಡುತ್ತಿದೆ. ಮುಂಬೈ ಹಾಗೂ ಗೋಕರ್ಣದ ರಥಬೀದಿಗಳಲ್ಲಿ ಒಂದು‌ ಸುತ್ತು ಸುತ್ತಿದಂಗಾಯ್ತೂ. ಅವರಿಗೆ ಅವರೇ ಸಾಟಿ. ಕಾಯ್ಕಿಣಿ ಅವರ ಅಲೆಮಾರಿತನದ ಅನುಭವಗಳು ಸೃಜನಶೀಲ ಬರಹಗಳಾಗಿ ಹೊರ ಹೊಮ್ಮಿವೆ. ಮುಂಬೈ ನಗರದ ಪ್ರೀತಿ, ಗೋಕರ್ಣದೊಂದಿಗಿರುವ ನಂಟು, ಆಪ್ತತೆ ಅವೆಲ್ಲವೂ ಅದರೆಡೆಗಿರುವ ತುಡಿತಗಳಾಗಿ ಹೊರ ಹೊಮ್ಮಿವೆ. ಮುಂಬೈ ಬದುಕನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ, ಶಹರು ಜೀವನದ ಸಾಮಾಜಿಕ ಸೂಕ್ಷ್ಮಗಳು, ತವಕ- ತಲ್ಲಣಗಳು, ನಗರದ ಬದುಕಿನ ಕಥೆಗಳು ಇಲ್ಲಿ ಅಕ್ಷರಗಳಲ್ಲಿ ಅನಾವರಣಗೊಂಡಿವೆ. ಇಲ್ಲಿ ಮುಂಬೈನ ಆಧುನಿಕತೆಯ ಜೊತೆಗೆ , ರಥಬೀದಿಯ ಕತೆಯನ್ನು ಲೇಖಕರು ದಾಖಲಿಸಿದ್ದಾರೆ. ಇದರ ಮತ್ತೊಂದು ವಿಶೇಷತೆ ಏನೆಂದರೆ ಅತೀ ಸಣ್ಣ ವಿಷಯಗಳನ್ನಿಟ್ಟುಕೊಂಡು ಅದನ...